Posts

Showing posts from July, 2021

ಸಾವ್ಲಾರಾಮ್ ಹಲ್ದಣ್ಕರ್ - ಜಯ ಸಾಲ್ಯಾನ್, ಮುಂಬೈ.

Image
ಸಾವ್ಲಾರಾಮ್ ಹಲ್ದ ಣ್ ಕರ್   ಸರಳವಾದ ಸುಲಭ ವಿಷಯದಿಂದ ವಿಶಾಲ ದೃಷ್ಟಿಕೋನವನ್ನು ವ್ಯಕ್ತಪಡಿಸುವ ಕೌಶಲ್ಯ ಶ್ರೀ . ಸಾವ್ಲಾರಾಮ್ ಲಕ್ಷ್ಮಣ್ ಹಲ್ದ ಣ್ ಕರ್ ಅವರ ವರ್ಣಚಿತ್ರಗಳಲ್ಲಿತ್ತು . ಚಿತ್ರಕಲೆಯ ಜಲವರ್ಣ ಮತ್ತು ತೈಲವರ್ಣ ಮಾಧ್ಯಮಗಳಲ್ಲಿ ಅವರು ವಿಶೇಷ ಖ್ಯಾತಿ ಹೊಂದಿದ್ದರು . ೨೯ ನವೆಂಬರ್ ೧೮೮೨ , ಕೊಂಕಣದ ಸಾವಂತ್ವಾಡಿಯಲ್ಲಿ ಜನಿಸಿದ ಅವರು ತನ್ನ ಮೂರನೆಯ ವಯಸ್ಸಿನಲ್ಲಿ ತಂದೆಯನ್ನು ಕಳಕೊಂಡರು . ಬಾಲ್ಯದ ಕಷ್ಟಕರ ಪರಿಸ್ಥಿತಿಯಲ್ಲೂ ಅವರ ಮನಸ್ಸು ಚಿತ್ರಕಲೆಯತ್ತ ಆಕರ್ಷಿತವಾಗತೊಡಗಿತ್ತು . ಕಲಾ ಶಿಕ್ಷಕ ಶ್ರೀ ಎನ್ . ಎಸ್ . ಮಾಲಂಕರ್ ಅವರ ಕಲಾತ್ಮಕತೆಯನ್ನು ನೋಡಿ , ಗ್ರೇಡ್ ಪರೀಕ್ಷೆಯನ್ನು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದರು . ೧೯೦೩ ರಲ್ಲಿ , ಅವರು ಸರ್ ಜೆ . ಜೆ . ಕಲೆ ಪ್ರವೇಶ ಪರೀಕ್ಷೆ ನೀಡಿ ಕಾಲೇಜಿಗೆ ಪ್ರವೇಶಿಸಿದರು . ಅಲ್ಲಿ ಅವರು ಪ್ರಮುಖ ಕಲಾ ಶಿಕ್ಷಕರಾಗಿದ್ದ ಗಣಪತ್ ರಾವ್ ಕೇದಾರಿ , ತ್ರಿದಾಂದ್ , ಆಗಾಸ್ಕರ್ , ವಾಲ್ಟರ್ ರೆಬ್ರೊಥಾಮ್ ಅವರನ್ನು ಭೇಟಿಯಾಗಿ ಅವರಿಂದ ಅಮೂಲ್ಯವಾದ ಮಾರ್ಗದರ್ಶನ ಪಡೆದರು . ಚಿತ್ರಕಲೆಯಲ್ಲಿ ಅವರು ಪಡೆದ ಪ್ರಾವೀಣ್ಯತೆಯಿಂದಾಗಿ ೧೯೦೭ ರಿಂದ ಒಬ್ಬ ವರ್ಣಚಿತ್ರಕಾರನಾಗಿ ಪ್ರಸಿದ್ಧರಾದರು . ಅವರ ವರ್ಣಚಿತ್ರಗಳು ಮುಂಬೈ , ಚೆನ್ನೈ , ಕೋಲ್ಕತಾ , ಮತ್ತು ಶಿಮ್ಲಾದಲ್ಲಿ ನಡೆದ ಕಲಾ ಪ್ರದರ್ಶನದ...

ಮಹಾರಾಷ್ಟ್ರದಲ್ಲಿನ ನಿಗೂಢ ಸ್ಥಳಗಳು... - ಜಯ ಸಾಲ್ಯಾನ್ (ಮುಂಬೈ)

Image
ಮಹಾರಾಷ್ಟ್ರದಲ್ಲಿನ ನಿಗೂಢ   ಸ್ಥಳಗಳು ... ನಾವು ಹೆದರಲು ಇಷ್ಟಪಡುತ್ತೇವೆಯೇ ?  ಈಗ ನೀವು ಏನಿದು, ಹೀಗೆ  ಪ್ರಶ್ನೆ ಮಾಡುತ್ತೀರಿ? ಅಂತ ಕೇಳಬಹುದು. ಹೇ, ನಮ್ಮಲ್ಲಿ ಕೆಲವರು ನಿಜವಾಗಿಯೂ ಭಯಪಡುವುದನ್ನು ಇಷ್ಟಪಡುತ್ತಾರೆ! ನೀವು ಒಂದು ಉದಾಹರಣೆಯನ್ನು ತೆಗೆದುಕೊಳ್ಳಬೇಕೆಂದಿದ್ದರೆ , ಈಗ ನೋಡಿ ಸಿನಿಮಾ ಬಿಡುಗಡೆಯಾದಾಗ, ದೆವ್ವದ ಸಿನಿಮಾ, ಭಯಾನಕ, ನಿಗೂಢವಾಗಿರುವುದು ನಮಗೆ ತಿಳಿದಿದ್ದರೂ ನಾವು ಹಣ ಕೊಟ್ಟು ಆ ಭಯವನ್ನು ಖರೀದಿಸುತ್ತೇವೆ... ತಮಾಷೆ ಅನಿಸಿದರೂ ಇದು ನಿಜ ಅಲ್ವಾ... ಮಾಲ್ ಗಳಲ್ಲಿ ಕೂಡ ನೀವು ಇತ್ತೀಚಿನ ದಿನಗಳಲ್ಲಿ ಘೋಸ್ಟ್ ಹೌಸ್ (Ghost House) ನೋಡಬಹುದು ! ಹಣ ಕೊಟ್ಟು ಟಿಕೆಟ್ ಖರೀದಿಸಿ ಒಳಗೆ ನಮ್ಮನ್ನು ನಾವೇ ಹೆದರಿಸುತ್ತೇವೆ . ಸ್ನೇಹಿತರೇ , ನಮ್ಮ ಮಹಾರಾಷ್ಟ್ರದಲ್ಲಿಯೂ   ಕೆಲವು ನಿಗೂಢ ಮತ್ತು ರಹಸ್ಯಾತ್ಮಕ ಪ್ರದೇಶಗಳಿವೆ , ಈ ಪ್ರದೇಶದೊಟ್ಟಿಗೆ ಕೆಲವು ಭೂತದ ಕಥೆಗಳನ್ನು ಜೋಡಿಸಲಾಗಿದೆ . ಈ ಲೇಖನದಲ್ಲಿ ಅಂತಹ ಕೆಲವು ಸ್ಥಳಗಳ ಬಗ್ಗೆ ನಿಮಗೆ ಮಾಹಿತಿ ನೀಡುವ ಪ್ರಾಮಾಣಿಕ ಪ್ರಯತ್ನ . ಮುಂಬೈಯಲ್ಲಿನ   ಡಿಸುಜಾ ಚಾವ್ಲ್: ೨೦ / ೩೦ ವರ್ಷಗಳ ಹಿಂದೆ   ಮುಂಬೈನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಚಾವ್ಲ್ ( ವಠಾರ ) ಗಳು ಇದ್ದವು . ಈ ಚಾವ್ಲ್ ಗಳು ವಿಭಿನ್ನ ವಾದ ಜೀವನ ಸಂಸ್ಕೃತಿಯನ್ನು ಹೊಂದಿದ್ದವು . ಒಬ...